ವಿಭಾಗಗಳು
ಆಚಾರ-ವಿಚಾರ - Rituals ಲೇಖನಗಳು

ಗುರುದೇವ

ಗುರುದೇವ

gurudev1.JPG
ಶ್ರೀ ದೇವೇಂದ್ರನಾಥ ಮಜುಮ್ದಾರ ವಿರಚಿತ ಶ್ರೀ ಗುರು: ತವಾಷ್ಟಕ

ಭವ ಸಾಗರ ತಾರಣ ಕಾರಣ ಹೇ ರವಿ ನಂದನ ಬಂಧನ ಖಂಡನ ಹೇ
ಶರಣಾಗತ ಕಿಂಕರ ಭೀತಮನೆ ಗುರುದೇವ ದಯಾಕರ ದೀನಜನೆ

ಹೃದಿಕಂದರ-ತಾಮಸ-ಭಾಸ್ಕರ ಹೇ, ತುಮಿ ವಿಷ್ಟು ಪ್ರಜಾಪತಿ ಶಂಕರ ಹೇ
ಪರಬ್ರಹ್ಮ ಪರಾತ್ಪರ ವೇದ ಭಣೇ, ಗುರುದೇವ ದಯಾಕರ ದೀನಜನೆ

ಮನ-ವಾರಣ-ಶಾಸನ-ಅಂಕುಶ ಹೇ, ನರತ್ರಾಣ ತರೇ ಹರಿ ಚಾಕ್ಷುಷ ಹೇ
ಗುಣಗಾನ-ಪರಾಯಣ ದೇವಗಣೇ, ಗುರುದೇವ ದಯಾಕರ ದೀನಜನೆ

ಕುಲಕುಂಡಲಿನೀ-ಘುಮ-ಭಂಜಕ ಹೇ ಹೃದಿ-ಗ್ರಂಥಿ-ವಿದಾರಣ-ಕಾರಕ ಹೇ
ಮಮ ಮಾನಸ ಚಂಚಲ ರಾತ್ರ ದಿನೇ, ಗುರುದೇವ ದಯಾಕರ ದೀನಜನೆ

ರಿಪು-ಸೂದನ ಮಂಗಲ ನಾಯಕ ಹೇ ಸುಖಶಾಂತಿ ವರಾಭಯ-ದಾಯಕ ಹೇ
ತ್ರಯ ತಾಪ ಹರೇ ತವ ನಾಮಗುಣೇ, ಗುರುದೇವ ದಯಾಕರ ದೀನಜನೆ

ಅಭಿಮಾನ-ಪ್ರಭಾವ-ವಿಮರ್ಧಕ ಹೇ ಗತಿಹೀನ ಜನೇ ತುಮಿ ರಕ್ಷಕ ಹೇ
ಚಿತಶಂಕಿತ ವಂಚಿತ ಭಕ್ತಿಧನೇ, ಗುರುದೇವ ದಯಾಕರ ದೀನಜನೆ

ತವನಾಮ ಸದಾ ಶುಭ-ಸಾಧಕ ಹೇ ಪತಿತಾಧಮ-ಮಾನವ-ಪಾವಕ ಹೇ
ಮಹಿಮಾ ತವ ಗೋಚರ ಶುದ್ಧಮನೇ, ಗುರುದೇವ ದಯಾಕರ ದೀನಜನೆ

ಜಯ ಸದ್ಗುರು ಈಶ್ವರ-ಪ್ರಾಪಕ ಹೇ ಭವ-ರೋಗ-ವಿಕಾರ ವಿನಾಶಕ ಹೇ
ಮನ ಯೇನ ರಹೇ ತವ ಶ್ರೀಚರಣೇ, ಗುರುದೇವ ದಯಾಕರ ದೀನಜನೆ

ಗುರುವಿನ ಅವಶ್ಯಕತೆ (ವಿನೋಬಾಜೀ ಚಿಂತನೆಗಳು)

ನಿಸ್ಸಂದೇಹವಾಗಿಯೂ ಮಕ್ಕಳಿಗೆ ಯಾವ ಭೌತವಿಜ್ಞಾನವೂ ಗುರುವಿನ ಸಹಾಯವಿಲ್ಲದೇ ದೊರಕಲಾರದು. ತಾಯಿ, ತಂದೆ, ಗುರು ತಿಳಿಸಿ ಹೇಳಿದರೆ ಮಕ್ಕಳು ಜ್ಞಾನ ಪಡೆಯುತ್ತಾರೆ. ಈ ಬಗೆಯ ಗುರು ಸಿಕ್ಕದೆಯೇ ಜ್ಞಾನ ಬೆಳೆಯಿತೆಂಬ ಅನುಭವ ಮಾತ್ರ ಬಂದುದಿಲ್ಲ. ಪ್ರಾಣಿಗಳಿಗೂ ಗುರು ಇರುತ್ತಾರೆ. ಅವುಗಳಿಗೆ ಮಾರ್ಗದರ್ಶನ ಮಾಡುತ್ತವೆ. ತಾಯಿ ತಂದೆಯರು ಪ್ರತ್ಯಕ್ಷ ಆಚರಣೆಯಿಂದ ಮಕ್ಕಳಿಗೆ ಕಲಿಸುತ್ತಾರೆ. ಅದರಿಂದ ಕೆಲವು ಪರಂಪರೆಗಳು ಬೆಳೆಯುತ್ತವೆ ಮತ್ತು ನಡೆದುಕೊಂಡು ಹೋಗುತ್ತಿರುತ್ತವೆ.

ಆದರೆ ಆತ್ಮಜ್ಞಾನದ ಸಂಬಂಧದಲ್ಲಿ ಹೇಳಬೇಕಾದರೆ ಗುರುವಿಲ್ಲದೆ ಅದು ದೊರೆಯದು ಎಂದು ತಿಳಿಯುವುದು ತಪ್ಪು. ಕಾರಣ ಆತ್ಮ ಎನ್ನುವ ವಸ್ತುವೇ ಹಾಗಿದೆ. ಅದು ನಮ್ಮೊಳಗಿನದೇ ಹೊರತು ಹೊರಗಿನದಲ್ಲ. ಯೋಗ್ಯ ಗುರು ದೊರಕಿದರೆ ಆತನ ಮಾರ್ಗದರ್ಶನದಿಂದ ಆತ್ಮದರ್ಶನ ಸರಳವಾಗುವುದು. ಆದರೆ ಇದರೆಲ್ಲಿ ‘ರೆ’ಯೇ ದೊಡ್ಡದು. ಅಂತಹ ಗುರುವಿನ ನೆರವಿಲ್ಲದೆಯೇ ಮಾರ್ಗ ದೂರವಾಗಬಹುದು ಮತ್ತು ಹೆಚ್ಚು ಕಷ್ಟವೂ ಆಗಬಹುದು. ಆದರೂ ಗುರುವಿಲ್ಲದೆ ಆತ್ಮ ಜ್ಞಾನ ದೊರಕದು ಎಂದು ಮಾತ್ರ ಹೇಳಬರುವುದಿಲ್ಲ. ಆತ್ಮ ಆಂತರಿಕ ವಸ್ತುವಾದುದರಿಂದ ಅದರ ಪ್ರಾಪ್ತಿಗೆ ಹೊರಗಣ ಗುರು ಬೇಕು ಎಂದು ತಿಳಿಯುವುದು ತಪ್ಪಾಗುವುದು. ಆದುದರಿಂದ ಆತ್ಮಜ್ಞಾನಕ್ಕೆ ಗುರು ಅನಿವಾರ್ಯವೆಂದು ಭಾವಿಸಬಾರದು.

ಗುರುವಿನ ಬಗ್ಗೆ

ದೃಷ್ಟಿದಾತನೇ ಎಲ್ಲಕ್ಕಿಂತ ಶ್ರೇಷ್ಠಗುರು. ದೃಷ್ಟಿಮಾತ್ರ, ಸ್ಪರ್ಶಮಾತ್ರ, ಆಲಿಂಗನ ಮಾತ್ರ ಮತ್ತು ಕಥನ ಮಾತ್ರದಿಂದಲೇ ಶಿಷ್ಯ ಬ್ರಹ್ಮನಾಗುವಂತಹ ಗುರುಗಳು ಇದ್ದಾರೆ. ಯಾಜ್ಞವಲ್ಕ್ಯರು ಜನಕನಿಗೆ ಜ್ಞಾನವನ್ನು ಕೊಟ್ಟರು ಮತ್ತು ಕೊನೆಯಲ್ಲಿ ಆತನ ಮುಖವು ತೇಜಸ್ಸಿನಿಂದ ಹೊಳೆಯುತ್ತಿದ್ದುದನ್ನು ಕಂಡರು. ಅವನು ಹೇಳಿದನು – ‘ಎಲೈ ಜನಕನೇ, ನೀನು ನಿರ್ಭೀತನಾದೆ. ಹೀಗೆ ಶ್ರವಣ ಮಾತ್ರದಿಂದ ಆತನಿಗೆ ಜ್ಞಾನ ದೊರಕಿತು. ಇದರಲ್ಲಿ ಶಿಷ್ಯನ ಗ್ರಹಣ ಸಾಮರ್ಥ್ಯವಂತೂ ಎದ್ದು ಕಾಣುತ್ತದೆ. ಆದರೆ ತನ್ನ ಶಬ್ದದಿಂದಲೇ ಅಷ್ಟೊಂದು ದೊಡ್ಡ ಕಾರ್ಯವನ್ನು ಸಾಧಿಸಿದ ಗುರುವಿನ ಶಕ್ತಿಯೂ ಸ್ಪಷ್ಟವಾಗಿ ತೋರುತ್ತದೆ. ಇಂತಹ ಗುರು ಇರುವುದು ಸಾಧ್ಯ.

ಗುರು ಮತ್ತು ಗುರು ಶಿಷ್ಯರ ಜೊತೆಗಳು

ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾರ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು. ಯಾರ ಶಿಷ್ಯರು ಗುರುವಿಗಿಂತ ದುರ್ಬಲರಾದಾರೋ ಅವರು ದುರ್ಬಲ ಗುರು. ಅದೇ ರೀತಿ ತಂದೆಯ ಲಕ್ಷಣವೆಂದರೆ ತನಗಿಂತ ತನ್ನ ಮಗ ಮುಂದೆ ಹೋಗುವಂತಾಗಬೇಕು. ದಶರಥನಿಗಿಂತ ರಾಮ ಮುಂದೆ ಹೋದನಾದ್ದರಿಂದ ದಶರಥ ಉತ್ತಮ ತಂದೆಯಾದನು. ರಾಮನು ಉತ್ತಮ ತಂದೆಯಾಗಲಿಲ್ಲ. ಏಕೆಂದರೆ ಅವನ ಮಕ್ಕಳು ಅವನಿಗಿಂತ ಮುಂದೆ ಹೋಗಲಿಲ್ಲ. ಹಿಂದೂಸ್ಥಾನದಲ್ಲಿ ಇಂತಹ ಗುರುಶಿಷ್ಯರ ಜೊತೆಗಳು ಎಲ್ಲೆಲ್ಲೂ ನೋಡಲು ಸಿಗುತ್ತವೆ. ಉದಾಹರಣೆಗೆ ಅಸ್ಸಾಮಿನಲ್ಲಿ ಶಂಕರದೇವ – ಮಾಧವದೇವ. ಮಾಧವದೇವ ಶಂಕರದೇವರಿಗಿಂತ ಮುಂದೆ ಹೋದರು. ಅಸ್ಸಾಮಿನಲ್ಲೆಲ್ಲಾ ಭಕ್ತಿಮಾರ್ಗ ಬಹಳವಾಗಿ ವ್ಯಾಪಿಸಿದುದು ಮಾಧವದೇವರಿಂದಲೇ. ಇತ್ತ ಬಂಗಾಲದಲ್ಲಿ ರಾಮಕೃಷ್ಣ – ವಿವೇಕಾನಂದರಂತಹ ಗುರು ಶಿಷ್ಯರ ಆದರ್ಶ ಜೋಡಿ ಇತ್ತು. ಮಾಧವದೇವರು ತಾವು ಶಂಕರದೇವರಿಗಿಂತ ಮುಂದೆ ಹೋದೆನೆಂದು ಖಂಡಿತ ಒಪ್ಪುತ್ತಿರಲಿಲ್ಲ. ವಿವೇಕಾನಂದರೂ ತಾವು ರಾಮಕೃಷ್ಣರಿಗಿಂದ ಮುಂದೆ ಹೋದೆನೆಂದು ಒಪ್ಪುತ್ತಿರಲಿಲ್ಲ. ಆದರೂ ವಿವೇಕಾನಂದರಿಲ್ಲದೇ ಇದ್ದಿದ್ದರೆ ರಾಮಕೃಷ್ಣರ ಪರಿಚಯ ಜಗತ್ತಿಗೆ ಆಗುತ್ತಿರಲಿಲ್ಲ. ಮಚ್ಛೀಂದ್ರನಾಥ – ಗೋರಖನಾಥರ ಜೊತೆಯೂ ಅಂತಹದ್ದೇ. ‘ಮಗುವನ್ನು ತೊಳೆದುಕೊಂಡು ಬಾ’ ಎಂದು ಮಚ್ಛೀಂದ್ರನಾಥರು ಹೇಳಿದಾಗ, ಗೋರಖನಾಥರು ಮಗುವಿನ ಕಾಲುಗಳನ್ನು ಹಿಡಿದು ಬಟ್ಟೆಯನ್ನು ಒಗೆಯುವಂತೆ ಎತ್ತೆತ್ತಿ ಒಗೆದರು. ಮಚ್ಛೀಂದ್ರನಾಥರಿಗೆ ವಿಷಯ ತಿಳಿದಾಗ – ‘ಏನಯ್ಯಾ! ಬಟ್ಟೆಯನ್ನು ಒಗೆಯುವ ಬಗೆ ಬೇರೆ. ಹುಡುಗನನ್ನು ತೊಳೆಯುವ ಬಗೆ ಬೇರೆ ಎಂದು ತಿಳಿಯದೇ?’ ಎನ್ನಲು, ಗೋರಖನಾಥರು ‘ನೀವು ಎರಡು ಬಗೆಗಳನ್ನು ತೋರಿಸಿದ್ದೀರ’, ಎಂದರು ಗುರುವು ಚೇತನ ಅಚೇತನಗಳ ನಡುವಿನ ಭೇದವನ್ನು ಇಟ್ಟಿದ್ದರೂ, ಶಿಷ್ಯನು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದನು.

ಅದೇ ರೀತಿ ಶಂಕರಾಚಾರ್ಯರನ್ನು ತೆಗೆದುಕೊಳ್ಳಿ. ಯಾರೂ ಅವರ ಗುರುವನ್ನು ತಿಳಿಯರು. ಆದರ ಅವರು ಕುಶಲತೆಯಿಂದ ತನ್ನ ಗುರುವಿನ ಹೆಸರನ್ನು ಜನರಿಂದ ಹಾಡಿಸಿದರು. ‘ಭಜ ಗೋವಿಂದ’ ಇದು ಅವರ ಗುರುವಿನ ಹೆಸರೆಂದು ತಿಳಿಯುವುದಿಲ್ಲ. ಭಗವಂತನ ಹೆಸರೆಂದೇ ತಿಳಿಯುವರು. ಆದರೆ ಶಂಕರಾಚಾರ್ಯರ ನಾಲ್ಕು ಶಿಷ್ಯರೂ ಅವರಿಗಿಂತ ಮುಂದೆ ಹೋಗಲಿಲ್ಲ. ಹೀಗೆ ಶಂಕರಾಚಾರ್ಯರು ಉತ್ತಮ ಶಿಷ್ಯರೂ ಮತ್ತು ದುರ್ಬಲ ಗುರುವೂ ಆಗಿ ಕಾಣಬರುತ್ತಾರೆ.

ಮಹಾರಾಷ್ಟ್ರದಲ್ಲಿ ಮೂರು ಜೊತೆಗಳ ಗುರು ಶಿಷ್ಯರು ನೆನಪಾಗುವರು. ಮೊದಲನೆಯದು – ನಿವೃತ್ತಿನಾಥ – ಜ್ಞಾನದೇವರು. ಅವರಿಬ್ಬರೂ ಅಣ್ಣತಮ್ಮಂದಿರು. ಜ್ಞಾನೇಶ್ವರಿಯನ್ನು ಬರೆದವರು ಜ್ಞಾನದೇವರು. ಎರಡನೆಯ ಜೊತೆ – ಏಕನಾಥ ಮತ್ತು ಜನಾರ್ಧನರದ್ದು. ಮೂರನೆಯ ಜೋಡಿ ರಾನಡೆ ಮತ್ತು ಗೋಖಲೆಯವರದ್ದು. ಇವರೆಲ್ಲರಲ್ಲೂ ಗುರುವಿಗಿಂತ ಶಿಷ್ಯ ಮುಂದೆ ಹೋದಂತಹ ಉದಾಹರಣೆಗಳು.