ಜೂನ್ ೧೭ರಂದು ಶ್ರೀ ಶ್ರೀಕಾಂತ ವೆಂಕಟೇಶರ ಹುಟ್ಟಿದ ಹಬ್ಬ
ಈ ಶುಭಸಂದರ್ಭದಲ್ಲಿ ನನ್ನೆಡೆಯಿಂದೊಂದು ಪುಟ್ಟ ಉಡುಗೊರೆ
ಒಂದಾಗಿದ್ದರೆ ಏನೊಂದ ಬಣ್ಣಿಸಲಿ
ಒಂದಲ್ಲದಿದ್ದರೆ ಹೇಗೆ ಪಟ್ಟಿ ಮಾಡಲಿ
ತಿಳಿದಿರುವುದೆಲ್ಲವೂ ಅಪೂರ್ಣ
ತಲೆಯೊಳಗೇನೋ ಮಿಂಚುತಿಹುದು
ಆದರದೇಕೋ ಲೇಖನಿಗೆ ನಿಲುಕದು
ಗೊತ್ತಿರುವುದಿಷ್ಟೇ ಇವರು ತಂಡದ ನಾಯಕ
ಹಿಂಬಾಲಿಸುತಿಹುದು ಅಭಿಯಂತರ ಹಿಂಡು ಹಿಂಡು
ಬುದ್ಧಿಯೋಡಿಸುವುದರಲಿ ಅಪ್ರತಿಮ
ಹೇಗೆ ಆಗಿರುವುದೋ ಈತನ ಹಾದಿ ಸುಗಮ
ನಿತ್ಯ ಆಗುತಿಹುದು ತಾಯಿಯ ಅರ್ಚನೆ
ಅದಕಾಗಿ ಇವರ ತನು ಮನಗಳ ಅರ್ಪಣೆ
ಪ್ರಸಾದವಾಗಿ ದೊರೆಯುತಿಹುದು ಸೂಚನೆ
ಎದೆಯಾಳದಲಿ ಭುಗಿಲೇಳುತಿಹುದು ಬೆಚ್ಚನೆ
ಹೆಸರಲ್ಲಿರುವುದು ಶ್ರೀಕಾಂತ
ಕಣ್ಣಲಿ ಕಾಣುವುದು ಅಯಸ್ಕಾಂತ
ತಲೆಯೋಡಿಸುವುದರಲಿ ಧೀಮಂತ
ವಿಜಯದ ಗೆರೆ ಮುಟ್ಟುವುದರಲಿ ಜಯಂತ
ಕಣ್ಣಿಗೆ ಕಾಣುವುದೊಂದೇ, ಅದು ದಿಗಂತ
ಹೃದಯವಂತಿಕೆಯಲಿ ಇವರೇ ಸಿರಿವಂತ
ಎನಿತೂ ಕಾಣಲಾರರಿ ಇವರಲಿ ದಿಗ್ಭ್ರಾಂತ
ಇವರ ಕಾಯುತಿಹನು ಅನಂತಾನಂತ
ಕೈ ಓಡಲಾರದೇ ಇಲ್ಲಿಯೇ ನಿಲುತಿಹೆನು
ಭಗವತ್ಪ್ರೇರಣೆಯಾಗಲು ಮತ್ತೆ ಬರಲಿಹೆನು
ಶ್ರೀಹರಿಯ ಕರುಣೆ ಇವರೊಂದಿಗಿರಲು ಹಾರೈಸುವೆನು
ಜಗವ ನಡೆಸುವ ರೂವಾರಿತ್ವ ಹೊಂದಲು ಆಶಿಸುವೆನು
ಗುರುದೇವ ದಯಾ ಕರೊ ದೀನ ಜನೆ

