ಮೇ 8 ನೆಯ ತಾರೀಖು ಪುಷ್ಪವೃಷ್ಟಿ ಆಗುವುದಿದೆ
ದೇವಲೋಕದಿಂದ ದೂತರು ದೇವತೆಗಳ ಶುಭ ಹಾರೈಕೆಯನ್ನು ತರುವವರಿದ್ದಾರೆ
ಅಂದು ಕಾನ್ಸಾಸ್ (ಕ್ಯಾತ್ಸಂದ್ರ) ದೊರೆ ಮನೋಹರ ಮತ್ತು ಚಿರಂಜೀವಿ ಹರಿದ್ರಾ ಕುಂಕುಮ ಶೋಭಿತೇ ಪೂರ್ಣಿಮಾರವರ ಪಾಣಿಗ್ರಹಣ ನಡೆಯುವುದಿದೆ.
ಮುಖತಃ ಕಂಡು ಮತ್ತು ಕಾಣದಿರುವ ಸ್ನೇಹಿತರೆಲ್ಲರಿಗೂ ವಿಶೇಷ ಆಮಂತ್ರಣ ಇದೆ ಎಂದು ಹೇಳಿಕೊಳ್ಳಲು ಎನಗೆ ಹೆಮ್ಮೆ ಎನಿಸುತ್ತಿದೆ.
ಮುಕ್ಕೋಟಿ ದೇವತೆಗಳು ನಭೋಮಂಡಲದಲಿ
ಕಿಕ್ಕಿರಿದು ಕಾಯುತಿಹರು ಆಶೀರ್ವದಿಸಲು
ಬೊಗಸೆಗಳಲಿ ಮದನನ ಪಂಚಬಾಣಗಳು
ಯಾರೀರ್ವರು ಭಾವೀ ಮಹಾ ದಂಪತಿಗಳು?
ನಡೆದಾಡುವ ದೇವರ ಪ್ರೀತಿ ಪಾತ್ರ
ಹಿಡಿದಿಹರು ಸಮಾಜವ ಮುನ್ನಡೆಸುವ ಸೂತ್ರ
ಹುಟ್ಟಿದ ಕುಟುಂಬದಿ ಕಣ್ಣಾಗಿರುವ ಕಣ್ಮಣಿ
ಮನದೊಳಗೆ ನಲಿಯುತಿಹುದು ಚಿಂತಾಮಣಿ
ಮಾತಿನಲೂ ಕೃತಿಯಲೂ ತಂಪೆರೆಯುವರು
ನಾಡಿನ ಹೆಸರ ಉತ್ತುಂಗಕೇರಿಸುತಿಹರು
ಕನ್ನಡಮ್ಮಗೆ ಕೃತಿ ಋಣವ ತೀರಿಸುತಿಹರು
ಕಿರು ಸಮಯದಲೇ ಮನೆ ಮಾತಾಗುತಿಹರು
ಮಾಸದಲ್ಲೊಮ್ಮೇ ಸಂತರ್ಪಣೆಯ ಬಡಿಸುವ ಚಂದಿರ
ಮನೆ ಮನಗಳ ತಂಪಿಸುವ ಹುಣ್ಣಿಮೆಯ ಸುಂದರ
ಕುಲಕೆ ಪ್ರತಿನಿತ್ಯವೂ ತಂಪನಿತ್ತ ಪೂರ್ಣಿಮಾ
ಕೊಟ್ಟ ಮನೆಯ ನಿತ್ಯ ಬೆಳಗುವ ಅನುಪಮಾ
ಚತುರ್ಭುಜಗಳು ಸೇರಿ ಜಗ ಬಲಪಡಿಸುತಿರಲು
ಪಾಣಿಗ್ರಹಣದಿ ಜನಸ್ತೋಮ ಹರ್ಷೋದ್ಗಾರ ಉಸುರುತಿರಲು
ಮನುಕುಲದೇಳಿಗೆಗೆ ಭದ್ರ ಬುನಾದಿಯಾಗುತಿರಲು
ಹಾಡಿ ಪೊಗಳಿ ಮಾರ್ದನಿಸುತಿಹೆ ಒಕ್ಕೊರಲು
ನಮ್ಮೆಲ್ಲರ ವತಿಯಿಂದ ಸಲ್ಲಲಿ ಶುಭ ಹಾರೈಕೆಗಳು
ಬೇಡುವಾ, ಸರ್ವಶಕ್ತನೀಯಲಿ ಎಲ್ಲ ಶಕ್ತಿಗಳು
ದಂಪತಿಗಳೀಯಲಿ ಜಗಕೆ ಪ್ರೇಮ ಕರುಣೆ ಶಾಂತಿ ಸಹನೆಗಳು
ನೂರ್ಕಾಲ ಬಾಳಿ ನಂಬಿದವರಿಗೆ ಕೊಡಲಿ ಬದುಕುಗಳು


